ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಪತನವಾಗಲು ಉಭಯ ಪಕ್ಷಗಳ ನಾಯಕರೇ ಕಾರಣ ಎಂದು ಹೇಳಿದ ವಿಶ್ವನಾಥ್, ಶಾಸಕರನ್ನು ಗೌರವದಿಂದ ಕಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದರು.
ವಿಶ್ವನಾಥ್ ಅವರ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಬಹುದೆಂಬ ಕಾರಣಕ್ಕೆ ಪತ್ರಿಕಾಗೋಷ್ಠಿ ನಡೆದ ಪತ್ರಕರ್ತರ ಭವನಕ್ಕೆ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿತ್ತು. ಮೀಸಲು ಪೊಲೀಸ್ ಪಡೆಯ ಎರಡು ವ್ಯಾನ್, 20 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಪತ್ರಿಕಾಗೋಷ್ಠಿ ಮುಗಿದ ಬಳಿಕ ಕಾರ್ಯಕರ್ತರಿಂದ ಪರ ಹಾಗೂ ವಿರೋಧದ ಘೋಷಣೆಗಳು ಕೇಳಿ ಬಂದಿದೆ.