No menu items!
17.6 C
Munich
Wednesday, April 29, 2026

ವಸತಿ ಇಲಾಖೆಯಲ್ಲಿ ಗೋಲ್ಮಾಲ್: ಮಿನಿಸ್ಟರ್‌ ರಾಜೀನಾಮೆ ನೀಡಲಿ – ಬೇಳೂರು ಗೋಪಾಲಕೃಷ್ಣ!

Must read

ವಸತಿ ಇಲಾಖೆಯಲ್ಲಿ ಗೋಲ್ಮಾಲ್: ಮಿನಿಸ್ಟರ್‌ ರಾಜೀನಾಮೆ ನೀಡಲಿ – ಬೇಳೂರು ಗೋಪಾಲಕೃಷ್ಣ!

ಶಿವಮೊಗ್ಗ : ವಸತಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಇಲಾಖಾ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ವಸತಿ ಇಲಾಖೆಯಲ್ಲಿನ ಸಮಸ್ಯೆ ಕುರಿತು ಹಿರಿಯ ಸದಸ್ಯರೊಬ್ಬರು ಆಪಾದನೆ ಮಾಡಿದ್ದಾರೆ. ಈ ಹಿನ್ನೆಲೆ ಸಂಬಂಧಿಸಿದ ಸಚಿವರು ರಾಜೀನಾಮೆ ನೀಡಿ, ತನಿಖೆ ಎದುರಿಸುವುದು ಸೂಕ್ತ ಎಂದರು. ಈ ಹಿಂದೆ ಹಲವು ಹಗರಣಗಳಾದಾಗ ಸಚಿವರುಗಳು ರಾಜೀನಾಮೆ ನೀಡಿದ್ದರು. ಅಂತೆಯೇ ಅಪಾದನೆ ಕೇಳಿ ಬಂದಿರುವುದರಿಂದ ಸಚಿವರು ರಾಜೀನಾಮೆ ನೀಡಬೇಕು. ತನಿಖೆ ಬಳಿಕ ಪುನಃ ಸಚಿವರಾಗುವುದು ಸೂಕ್ತ ಎಂದರು.

ಈ ಆರೋಪದಿಂದ ಸರ್ಕಾರ ಮುಜುಗರಕ್ಕೀಡಾಗಿದೆ. ಹೀಗಾಗಿ ಸಚಿವರು ರಾಜೀನಾಮೆ ಕೊಡೋದು ಸೂಕ್ತ ಎಂದಿದ್ದಾರೆ.

- Advertisement -spot_img

More articles

- Advertisement -spot_img

Latest article