No menu items!
11.3 C
Munich
Wednesday, April 22, 2026

ಜೀವನಾಧಾರವಾಗಿದ್ದ ಆಡುಗಳನ್ನು ಮಾರಿ ಶೌಚಾಲಯ ಕಟ್ಟಿಸಿ, ಜಾಗೃತಿ ಮೂಡಿಸಿದ ಶತಾಯುಷಿ

Must read

ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೆ ಬರ್ತಾ ಇದೆಯೋ ಗೊತ್ತಿಲ್ಲ..! ಸ್ವಚ್ಚ ಭಾರತ ನಿರ್ಮಾಣ ಮಾಡ್ಬೇಕು ಅಂತ ಸರ್ಕಾರ ಒದ್ದಾಡ್ತಾ ಇದೆ..! ಶೌಚಾಲಯ ಬಳಸಿ ಅಂತ ಪದೇ ಪದೇ ಹೇಳ್ತಾ ಇದೆ..! ನಾನಾ ಜಾಹಿರಾತುಗಳ ಮೂಲಕ ಕೂಡ ಅರಿವು ಮೂಡಿಸೋ ಕಾರ್ಯಕ್ರವನ್ನು ಮಾಡ್ತಾ ಇದೆ..! ಇದು ಯಾರ ಮೆಲೆ ಎಷ್ಟು ಪ್ರಭಾವ ಬೀರಿದೆಯೋ ಗೊತ್ತಿಲ್ಲ.., ಆದ್ರೆ ಶತಾಯುಷಿ ಅಜ್ಜಿ ಮೇಲಂತೂ ಗಾಢಪ್ರಭಾವ ಬೀರಿದೆ…! ಅಜ್ಜಿಯಲ್ಲಿ ಸ್ವಚ್ಛಭಾರತ ಕಲ್ಪನೆ ಮೂಡಿದೆ..! ಈ ಅಜ್ಜಿ ಸ್ವಚ್ಛಭಾರತಕ್ಕಾಗಿ ಏನ್ ಮಾಡಿದ್ದಾರೆ ಗೊತ್ತೇ..?
ಆ 102 ವರ್ಷದ ಅಜ್ಜಿಯ ಹೆಸರು ಕೌರ್ಬಾಯ್ ಯಾದವ್. ರಾಯಪುರದ ದಮ್ತರಿ ಜಿಲ್ಲೆಯ ಕೋತಬರ್ರಿ ಎಂಬ ಸಣ್ಣ ಹಳ್ಳಿಯವರು..! ಟಿವಿಯಲ್ಲಿ ಶೌಚಾಲಯದ ಬಗ್ಗೆ ಅರಿವು ಮೂಡಿಸುವ ಜಾಹಿರಾತುಗಳನ್ನು ನೋಡ್ತಾರೆ..! ಅಷ್ಟೇ ಅಲ್ಲದೆ ತಮ್ಮ ಹಳ್ಳಿಯ ಹೆಣ್ಮಕ್ಕಳು ಬಯಲು ಶೌಚಕ್ಕೆ ಹೋಗಬೇಕಾಗಿರುವ ಸ್ಥಿತಿಯನ್ನೂ ಕಣ್ಣಾರೆ ನೋಡಿರ್ತಾರೆ..! ಈ ಬಗ್ಗೆ ನಾನೂ ಕೂಡ ನನ್ನಿಂದ ಸಾಧ್ಯವಾದಷ್ಟು ಅರಿವು ಮೂಡಿಸ್ಬೇಕು ಅನ್ನೋ ತೀರ್ಮಾನಕ್ಕೂ ಬರ್ತಾರೆ..! ಅದಕ್ಕಾಗಿ ಅವರು ಮೊದಲು ಅವರ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗ್ತಾರೆ..! ಶೌಚಾಲಯ ನಿರ್ಮಾಣಕ್ಕೆ ಬೇಕಾದಷ್ಟು ಹಣ ಕೈಯಲ್ಲಿರುವುದಿಲ್ಲ ಅದಕ್ಕಾಗಿ 22,000 ರೂಪಾಯಿಗಳಿಗೆ ತನ್ನಲ್ಲಿದ್ದ ಆಡುಗಳನ್ನು ಮಾರಾಟ ಮಾಡ್ತಾರೆ..! ಜೀವನಾಧರವಾಗಿದ್ದ ಆಡುಗಳನ್ನು ಮಾರಿ ಶೌಚಾಲಯ ಕಟ್ಟೋ ಮೂಲಕ ಇಡೀ ಊರಿನವರಲ್ಲಿ ಅರಿವು ಮೂಡಿಸ್ತಾರೆ..! ಈ ಅಜ್ಜಿಯ ಸ್ಫೂರ್ತಿಯಿಂದ ಸರಿ ಸುಮಾರು 450ಕ್ಕೂ ಅಧಿಕ ಜನರು ವಾಸವಾಗಿರುವ ಈ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಇಂದು ಶೌಚಾಲಯ ಇದೆ..! ಸರ್ಕಾರ, ಕಾರ್ಪೋರೇಟ್ ವಲಯಗಳಿಂದಲೇ, ಶಿಕ್ಷಿತರಿಂದಲೇ ಹಳ್ಳಿಯ ಪ್ರತಿ ಮನೆಯಲ್ಲೂ ಶೌಚಾಲಯ ಕಟ್ಟಿಸಲು ಸಾಧ್ಯವಾಗದಿರುವಾಗ, ನಮ್ಮ ಜನರಿಗೆ ಎಷ್ಟೇ ಬುದ್ಧಿ ಹೇಳಿದರೂ ಜಾಗೃತಿ ಮೂಡದೇ ಇರುವ ಈ ಕಾಲದಲ್ಲಿಯೇ ಶತಾಯುಷಿ ಅಜ್ಜಿ ಶೌಚಾಲಯ ಕಟ್ಟಿಸಿ, ಇಡೀ ಹಳ್ಳಿಯನ್ನೇ ಬಯಲು ಶೌಚದಿಂದ ದೂರ ಮಾಡಿದ್ದು ಸ್ಪೂರ್ತಿದಾಯಕವೇ ಸರಿ..! ಈ ಅಜ್ಜಿಯನ್ನು ನೋಡಿಯಾದರೂ ಇಡೀ ಭಾರತದ ಎಲ್ಲಾ ಮನೆಗಳಲ್ಲಿಯೂ ಶೌಚಾಲಯ ನಿರ್ಮಾಣವಾಗಲಿ..ಅಜ್ಜೀ.. ನೀವು ತುಂಬಾನೇ ಗ್ರೇಟ್ ಆಗ್ಬಿಟ್ರೀ ರೀ..!
ಶಶಿಧರ ಡಿ ಎಸ್ ದೋಣಿಹಕ್ಲು

POPULAR  STORIES :

ಇದು ಭಾರತದ `ಶ್ರೀಮಂತ’ ಭಿಕ್ಷುಕರ ಕಥೆ..!

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article