ದುಡ್ಡು ಎನ್ನೋದು ಕೆಲ ಜನರ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿರುತ್ತದೆ. ಆದರೆ ಅದನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದು ಮಾತ್ರ ಅವರಿಗೆ ಗೊತ್ತೇ ಇರುವುದಿಲ್ಲ. ಇದಕ್ಕೆ ಸಾಕ್ಷಿ ಈ ವ್ಯಕ್ತಿ. ಈತನ ಹೆಸರು ಗೌತಮ್ ಕುಂದು ಅಂತ. ಈತನ ಆಸ್ತಿಯನ್ನು ನೋಡಿದರೆ ಒಮ್ಮೆ ತಲೆ ಗಿರ್ ಗಿಟ್ಲೆ ತರಹ ತಿರುಗುತ್ತೆ. ರೋಸ್ ವ್ಯಾಲಿ ಗ್ರೂಪ್ ನ ನ ಸಿ.ಇ.ಓ ಆಗಿರುವ ಇವರು 12 ರಾಜ್ಯಗಳಲ್ಲಿ ಸುಮಾರು 700 ಎಕರೆ ಜಮೀನನ್ನು ಹೊಂದಿದ್ದಾರೆ. ಅದೂ ಅಲ್ಲದೇ 150 ಕಾರುಗಳನ್ನು ತನ್ನ ಗ್ಯಾರೇಜ್ ನಲ್ಲಿ ನಿಲ್ಲಿಸಿಕೊಂಡಿದ್ದಾನೆ. ಇದರಲ್ಲಿ 12ಕ್ಕೂ ಹೆಚ್ಚು ವಿದೇಶದ ಐಶಾರಾಮಿ ಕಾರುಗಳಿವೆ..!
ಬಹುಶ: ಈ ಮನುಷ್ಯನಿಗೆ ಒಂದೆರೆಡು ಅಕೌಂಟ್ ಇದ್ದರೆ ಸಾಲದು ಅನ್ನಿಸುತ್ತೆ ಅಥವಾ 15000 ಕೋಟಿಗೂ ಹೆಚ್ಚಿನ ಹಣವನ್ನು ಎಲ್ಲಿಡೋದು ಎಂಬುದು ಗೊತ್ತಾಗ್ಲಿಲ್ವೋ ಏನೋ..? ಅದಕ್ಕೆ ಸುಮಾರು 3078 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾನೆ. ಅಲ್ಲದೇ ಇವರ ಉದ್ಯಮ ಇಡೀ ರಾಷ್ಟ್ರವನ್ನು ವ್ಯಾಪಿಸಿಕೊಂಡಿದೆ. ಪಶ್ಚಿಮ ಬಂಗಾಳ, ಓಡಿಶಾ, ಬಿಹಾರ, ಅಸ್ಸಾಂ, ಪಂಜಾಬ್, ದೆಹಲಿ, ರಾಜಸ್ಥಾನ್, ಮಧ್ಯಪ್ರದೇಶ, ತ್ರಿಪುರ, ಜಾರ್ಖಂಡ್ ಮತ್ತು ಆಂಧ್ರಪ್ರದೇಶಗಳಲ್ಲಿ ಇವರು ಉದ್ಯಮ ನಡೆಸುತ್ತಿದ್ದಾರೆ.
ಹಣ ಇದ್ದವರಿಗೆ ನೆಮ್ಮದಿ ಇರುವುದಿಲ್ಲ ಎನ್ನುವ ಮಾತು ಕುಂದುಗೆ ಅನ್ವಯವಾಗುತ್ತದೆ. ಏಕೆಂದರೆ ಈ ಎಲ್ಲಾ ಸಂಪತ್ತನ್ನು ವಂಚನೆ ಮೂಲಕ ಗಳಿಸಲಾಗಿದೆ ಎಂಬುದು ಗೌತಮ್ ಕುಂದುಗೆ ಅಂಟಿಕೊಂಡಿರುವ ಆರೋಪ. ಹೀಗಾಗಿ ಆ ಎಲ್ಲಾ ಪ್ರಕರಣಗಳ ತನಿಖೆಯೂ ನಡೆಯುತ್ತಿದೆ. ಹಣ ಇದ್ದರೂ ನೆಮ್ಮದಿ ಇರುವುದಿಲ್ಲ ಎಂಬ ಹಳೆಯ ಮಾತು ಗೌತಮ್ ಕುಂದುಗೆ ಅನ್ವಯವಾಗುತ್ತೆ ಅಲ್ವಾ..?
- ರಾಜಶೇಖರ ಜೆ
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಅಂಗವೈಕಲ್ಯತೆಯನ್ನು ಮೆಟ್ಟಿನಿಂತ ಆಟೋಡ್ರೈವರ್..! ಮನಮುಟ್ಟುವ ಈ ವೀಡಿಯೊವನ್ನು ತಪ್ಪದೇ ನೋಡಿ.
ಬಸ್ ಸ್ಟ್ಯಾಂಡ್ ನಲ್ಲಿ ನಿಂತಾಗ ಈಕೆಗೆ ಬಸ್ ಸಿಗದಿದ್ದರೆ ಏನ್ಮಾಡ್ತಾಳೆ ಗೊತ್ತಾ..?
45 ದಿನದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ..!
ಈ ಬಿಲ್ಡಿಂಗ್ ಕಟ್ಟಿರೋದೆ ಲವ್ ಲೆಟರ್ ನಲ್ಲಿ…! ಇದನ್ನು ಕಟ್ಟೋಕೆ ಎಷ್ಟು ಲವ್ ಲೆಟರ್ ಬಳಸಿದ್ದಾರೆ ಗೊತ್ತಾ..?
ಸೈಬರ್ ವಂಚನೆಯಿಂದ ಮಹಿಳೆಯನ್ನು ಕಾಪಾಡಿದ ಬ್ಯಾಂಕ್ ಉದ್ಯೋಗಿ..!
ಅಕ್ಕನ ನೆನಪು ಈ ಪುಟ್ಟ ತಮ್ಮನಿಗೆ ಎಷ್ಟೊಂದು ಕಾಡ್ತಾ ಇದೆ ಗೊತ್ತಾ..? ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿ..!
ಇಲ್ನೋಡ್ರೀ ಕೆಲಸ ಕಮ್ಮಿ, ಸಂಬಳ ಜಾಸ್ತಿ…!
ಭಾರತದ 50% ಆಸ್ತಿ 1% ಟಾಪ್ ಶ್ರೀಮಂತರ ಬಳಿಯೇ ಇದೆ..!
ಬಡವರಿಗಾಗಿ ವಿಮಾನ ಖರೀದಿಸಿದ ನಿವೃತ್ತ ಇಂಜಿನಿಯರ್..! ವಿಮಾನ ಕೊಳ್ಳಲು ಭೂಮಿಯನ್ನೇ ಮಾರಿದರು..!
ಭಾರತೀಯ ನಟಿಯರನ್ನು ಕಂಡ ಕೋರಿಯನ್ನರಿಗೇಕೆ ಅಚ್ಚರಿ ಆಯಿತು..!