ಬೆರಳೆಣಿಕೆಯ ಬರಹವಿದು
ಬರೆದಷ್ಟು ಮುಗಿಯದಿದು
ಬರಡಾದ ಜೀವದಲಿ
ಹೊಸ ಹುರುಪಿನ ಚಿಗುರು ಇದು
ದೂರದೂರಿನ ಚಂದಿರನ ಹಸ್ತವ
ಧರಣಿಗೆ ಹಿಡಿದಾಗ
ನೂರೆಂಟು ಮನದ ಉಬ್ಬರ ಇಳಿತವಿದು
ಅರಳಿ ಉರುಳುವ ಕಾಲದಿ
ಮನದಿ ಕೆರಳಿ ಮರಳಿದ
ಮೂರಕ್ಷರದ ಜ್ಞಾನವಿದು
ವೇದ ಶಾಸ್ತ್ರದ ಸೂತ್ರವಿಲ್ಲಿಲ್ಲ
ನೋವು-ನಲಿವಲಿ ತೇದಿಹ
ಬರಹಗಳೇ ಜೀವಂತ
ನಕ್ಷತ್ರಗಳ ಸೂರಿನಲಿ ಕುಂತು
ಮಳೆಯ ಹನಿಯ
ಮೈಗಂಟಿಸಿಕೊಂಡ ಮೈಯಿದು
ಏನೇ ಹೇಳಲಿ ಕಾವ್ಯದತ್ತ
ಮಾನವನ ಬೆತ್ತಲೆಯ ಬದುಕಲ್ಲಿ
ಕತ್ತಲೆಯು ಸುಳಿದಾಗ
ಸುತ್ತೆಲ್ಲಾ ಹುಡುಕಿ ತೆಗೆದ
ಬೆಂಕಿಯ ಕಿಡಿಯು
ಊರ ಬೆಳಗುವ ಬರದಿ
ಸಾವಿನ ಕತ್ತಲೂ ನರನ ಎದೆಯಲಿ
ಶಿವನ ನಾಮವ
ಪಾಡುವಂತೆ ಮಾಡಿಹುದು.
ಏನೀ ಜನುಮ ಅಂಜಿಕೆಯಲೇ
ಅಂತರಂಗವ ಶುದ್ಧಿಸುತಿಹುದು –
ಶಕ್ತಿಯ ಆರಾಧಿಸುತಿಹುದು.⭐
✍?ದತ್ತರಾಜ್ ಪಡುಕೋಣೆ