ICC T20 ರ್ಯಾಕಿಂಗ್ ನಲ್ಲಿ ಟಾಪ್ 10 ನಲ್ಲಿ ಇಬ್ಬರು ಭಾರತೀಯರು!

Date:

ICC T20 ರ್ಯಾಕಿಂಗ್ ನಲ್ಲಿ ಟಾಪ್ 10 ನಲ್ಲಿ ಇಬ್ಬರು ಭಾರತೀಯರು!

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬುಧವಾರ ಪ್ರಕಟವಾಗಿರುವ ಐಸಿಸಿ ಟಿ20 ಬ್ಯಾಟಿಂಗ್‌ ಶ್ರೇಯಾಂಕದಲ್ಲಿ 7ನೇ ಸ್ಥಾನಕ್ಕೇರಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ ಮೂರನೇ ಸ್ಥಾನದಲ್ಲಿಯೇ ಉಳಿದಿದ್ದಾರೆ.
ಪಾಕಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ 6 ವಿಕೆಟ್‌ ಕಬಳಿಸಿದ್ದ ನ್ಯೂಜಿಲೆಂಡ್‌ನ ಹಿರಿಯ ವೇಗಿ ಟಿಮ್‌ ಸೌಥ್‌ ಅವರು ಬೌಲಿಂಗ್‌ ಶ್ರೇಯಾಂಕದಲ್ಲಿ 13 ರಿಂದ 7ಕ್ಕೆ ಜಿಗಿದಿದ್ದಾರೆ. ನ್ಯೂಜಿಲೆಂಡ್‌ನ ಇತರೆ ಆಟಗಾರರಾದ ಡೆವೊನ್‌ ಕಾನ್ವೇ ಹಾಗೂ ಗ್ಲೆನ್‌ ಫಿಲಿಪ್‌ ಅವರು ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ್ದಾರೆ. ಕಿವೀಸ್‌ ವೇಗಿ ಸ್ಕಾಟ್‌ ಕಗ್ಲೇಜಿನ್‌ ಟಿ20 ಸರಣಿಯಲ್ಲಿ 5 ವಿಕೆಟ್‌ ಪಡೆಯುವ ಮೂಲಕ ಬೌಲಿಂಗ್‌ ಶ್ರೇಯಾಂಕದಲ್ಲಿ 134 ರಿಂದ 92ಕ್ಕೇರಿದ್ದಾರೆ.

ಪಾಕಿಸ್ತಾನದ ಪರ ಟಿ20 ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಮಾಡಿ 140 ರನ್‌ ಕಲೆ ಹಾಕಿದ್ದ ಮೊಹಮ್ಮದ್ ಹಪೀಝ್‌ ಬ್ಯಾಟಿಂಗ್‌ ವಿಭಾಗದಲ್ಲಿ 14 ಸ್ಥಾನಗಳನ್ನು ಜಿಗಿದು 33ನೇ ಶ್ರೇಯಾಂಕ ಪಡೆದಿದ್ದಾರೆ. ಅವರು ನ್ಯೂಜಿಲೆಂಡ್‌ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಅಜೇಯ 99 ರನ್‌ ಸಿಡಿಸಿದ್ದರು.
ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿ ಡೇವಿಡ್‌ ಮಲನ್‌ ಹಾಗೂ ಎರಡನೇ ಸ್ಥಾನದಲ್ಲಿ ಬಾಬರ್‌ ಆಝಮ್‌ ಇದ್ದಾರೆ. ಇನ್ನು ಬೌಲಿಂಗ್‌ ಅಗ್ರ ಶ್ರೇಯಾಂಕದಲ್ಲಿ ಅಫ್ಘಾನಿಸ್ತಾನದ ರಶೀದ್‌ ಖಾನ್‌ ಉಳಿದುಕೊಂಡಿದ್ದಾರೆ.
ಪಾಕಿಸ್ತಾನದ ವೇಗಿ ಫಹೀಮ್ ಅಶ್ರಫ್‌ 22 ಸ್ಥಾನಗಳನ್ನು ದಾಟಿ 13ನೇ ಶ್ರೇಯಾಂಕ ಪಡೆದರೆ, ಮತ್ತೊಬ್ಬ ವೇಗಿ ಶಾಹೀನ್‌ ಅಫ್ರಿದಿ 11 ಸ್ಥಾನಗಳಲ್ಲಿ ಏರಿಕೆ ಕಂಡು ವೃತ್ತಿ ಜೀವನದ ಶ್ರೇಷ್ಠ 16ನೇ ಶ್ರೇಯಾಂಕ ಪಡೆದಿದ್ದಾರೆ. ಇನ್ನು ಸರಣಿಯಲ್ಲಿ ಐದು ವಿಕೆಟ್‌ ಕಬಳಿಸಿದ್ದ ಹ್ಯಾರಿಸ್‌ ರಾವುಫ್‌ 42 ಸ್ಥಾನಗಳನ್ನು ದಾಟಿ 67ಕ್ಕೇರಿದ್ದಾರೆ.
ಐಸಿಸಿ ಪುರುಷರ ಟಿ20 ತಂಡದ ಶ್ರೇಯಾಂಕದಲ್ಲಿ ಪಾಕಿಸ್ತಾನ ಮೂರು ಅಂಕಗಳನ್ನು ಕಳೆದುಕೊಂಡರೆ, ನ್ಯೂಜಿಲೆಂಡ್ ಮೂರು ಅಂಕಗಳನ್ನು ಸಂಪಾದಿಸಿದೆ. ಆದರೆ, ಎರಡೂ ತಂಡಗಳು ಕ್ರಮವಾಗಿ ನಾಲ್ಕು ಮತ್ತು ಆರನೇ ಸ್ಥಾನಗಳಲ್ಲಿಯೇ ಉಳಿದುಕೊಂಡಿವೆ.

ಬೀದರ್ ಹುಡುಗನಿಗೆ ಇಂಗ್ಲೆಂಡ್ ಪಾರ್ಲಿಮೆಂಟರ್ ಲೀಡರ್ಶಿಪ್

ಲಂಡನ್‌ನಲ್ಲಿರುವ ಪ್ರತಿಷ್ಠಿತ ಕೋವೆಂಟ್ರಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪ್ರತಿನಿಧಿ ಆಗಿ ಆಯ್ಕೆಯಾಗಿ ಗಮನ ಸೆಳೆದಿದ್ದ ಬೀದರ್ ನಗರದ ಪ್ರತಿಭಾವಂತ ವಿದ್ಯಾರ್ಥಿ ಆದೀಶ್ ಡಾ. ರಜನೀಶ್ ವಾಲಿ ಇದೀಗ ಮತ್ತೊಂದು ಸಾಧನೆ ಮಾಡಿದ್ದಾರೆ.
ವಿಶ್ವಸಂಸ್ಥೆ ಪ್ರಶಸ್ತಿ ಪುರಸ್ಕೃತ ಫೇಥ್ ಆ್ಯಂಡ್ ಬಿಲೀಫ್ ಫೋರಂನ ಪಾರ್ಲಿಮೆಂಟರ್ ಲೀಡರ್‌ಶಿಪ್ ಪ್ರೋಗ್ರಾಂನಲ್ಲಿ ಪಾಲ್ಗೊಳ್ಳುವ ಸದಾವಕಾಶ ಪಡೆದುಕೊಂಡಿದ್ದಾರೆ. ಈ ಅವಕಾಶ ಪಡೆದ, ಏಕೈಕ ಭಾರತೀಯ, ಅದರಲ್ಲೂ ಕನ್ನಡಿಗ ಎನ್ನುವುದು ವಿಶೇಷ.

ಫೇಥ್ ಆ್ಯಂಡ್ ಬಿಲೀಫ್ ಫೋರಂ ಪ್ರತಿಷ್ಠಿತ ಹಾಗೂ ಗೌರವಾನ್ವಿತ ಸಂಸ್ಥೆಯಾಗಿದ್ದು, ವಿಶ್ವಸಂಸ್ಥೆಯಿಂದ ಪುರಸ್ಕಾರ ಪಡೆದಿದೆ. ಈ ಸಂಸ್ಥೆಯು ಪ್ರತಿ ವರ್ಷ ಯುವ ನಾಯಕತ್ವ ಬೆಳವಣಿಗೆ ಮತ್ತು ಯುವಕರಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ, ಉದ್ಯಮ ಸ್ಥಾಪನೆ, ತಂತ್ರಜ್ಞಾನ ಬಳಕೆ ಸೇರಿ ಎಲ್ಲ ಕ್ಷೇತ್ರಗಳ ಬಗ್ಗೆ ಪರಿಪೂರ್ಣತೆ ಪಡೆದುಕೊಳ್ಳಲು ನೆರವಾಗುವ ಪಾರ್ಲಿಮೆಂಟರ್ ಲೀಡರ್‌ಶಿಪ್ ಪ್ರೋಗ್ರಾಂ ರೂಪಿಸಿದೆ.
ನಾಯಕತ್ವ ಗುಣ ಇರುವ ಮತ್ತು ಯುವ ಉದ್ಯಮಿಗಳನ್ನು ಈ ಪ್ರತಿಷ್ಠಿತ ಯೋಜನೆಯಡಿ ಆಯ್ಕೆ ಮಾಡಲಾಗುತ್ತದೆ. 2020-21ನೇ ಸಾಲಿಗಾಗಿ ಐವರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಆಯ್ಕೆಯಾಗಿರುವ ಆದೀಶ್ ವಾಲಿ ಏಕೈಕ ಭಾರತೀಯರು. ಮೇಲಾಗಿ ಕನ್ನಡಿಗರು ಎನ್ನುವುದು ವಿಶೇಷ ಸಂಗತಿ.
ಪಾರ್ಲಿಮೆಂಟರ್ ಲೀಡರ್ ಶಿಪ್ ಪ್ರೋಗ್ರಾಂ ಅಡಿ ಆಯ್ಕೆಯಾದವರು ಇಂಗ್ಲೆಂಡ್ ಲೋಕಸಭಾ ಸದಸ್ಯೆ ತೈವೊ ಅವರೊಂದಿಗೆ ರಾಜಕೀಯ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದು.
ಪಾರ್ಲಿಮೆಂಟರ್ ಲೀಡರ್ ಶಿಪ್ ಪ್ರೋಗ್ರಾಂ ಅಡಿ ಆಯ್ಕೆಯಾದವರು ಇಂಗ್ಲೆಂಡ್ ಲೋಕಸಭಾ ಸದಸ್ಯೆ ತೈವೊ ಅವರೊಂದಿಗೆ ರಾಜಕೀಯ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದು.
ಇಂಗ್ಲೆಂಡ್‌ನ ಪಾರ್ಲಿಮೆಂಟ್ ಆಗಿರುವ ವೆಸ್ಟ್ ಮಿನಿಸ್ಟರ್ ಕಲಾಪದಲ್ಲಿ ಭಾಗಿಯಾಗಬಹುದು. ಅಲ್ಲಿನ ಪ್ರಧಾನಿಯವರು ಪಾಲ್ಗೊಳ್ಳುವ ಅಧಿವೇಶನದಲ್ಲೂ ಪಾಲ್ಗೊಳ್ಳಬಹುದು.
ಇದರ ಜೊತೆಗೆ ಇಂಗ್ಲೆಂಡ್‌ನ ಹೆಸರಾಂತ ಕಂಪೆನಿಗಳ ಸಿಇಒ ಮತ್ತು ನಿರ್ದೇಶಕರನ್ನು ಭೇಟಿಯಾಗುವ, ಕಾರ್ಯ ವಿಧಾನ ತಿಳಿದುಕೊಳ್ಳುವ ಅವಕಾಶವೂ ಇರುತ್ತದೆ.
ಉದ್ಯಮ ಕ್ಷೇತ್ರದಲ್ಲಿನ ಒಳಹೊರಗನ್ನು ತಿಳಿದುಕೊಳ್ಳುವ ಅವಕಾಶವೂ ಲಭಿಸುತ್ತದೆ. ವರ್ಷದ ಅವಧಿ ಪೂರ್ಣಗೊಂಡ ನಂತರ ವೈವಿಧ್ಯಪೂರ್ಣ ಕಾರ್ಯಕ್ರಮ ನಡೆಸಿ ಪದವಿ ಪ್ರದಾನ ಮಾಡಲಾಗುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ, ಜಾಗತಿಕ ಮನ್ನಣೆ ಇರುವ ಸಂಸ್ಥೆಯೊಂದರ ಮಹತ್ವದ ಯೋಜನೆಯಡಿ ಆದೀಶ್ ರಜನೀಶ ವಾಲಿ ಆಯ್ಕೆಯಾಗಿದ್ದಾರೆ. ಆ ಮೂಲಕ ಜಿಲ್ಲೆಯ, ರಾಜ್ಯದ, ದೇಶದ ಗೌರವ ಹೆಚ್ಚಿಸಿದ್ದಾರೆ.


ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಗೊಂಡ ಕೊರೊನಾ ವೈರಸ್‌ ನಿಯಂತ್ರಿಸುವ ಸಂಬಂಧ ಡಿಸೆಂಬರ್ 24 ರಿಂದ ಜನವರಿ 2 ರವರೆಗೆ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಕೋಲಾರ ನಗರದ ಹೊರವಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಕರ್ಫ್ಯೂ ಜಾರಿ ಮಾಡುವ ಸಂಬಂಧ ಚರ್ಚೆ ನಡೆದಿತ್ತು. ಇದೀಗ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೂ ಕರ್ಫ್ಯೂ ಹೇರಲು ನಿರ್ಧರಿಸಲಾಗಿದೆ ಎಂದರು.
ಈ ವಿಚಾರದಲ್ಲಿ ಅಬಕಾರಿ ಇಲಾಖೆ ಪಾಲು ಜಾಸ್ತಿ ಇದೆ ಎಂದ ಸಚಿವರು, ನಾವು ಸಡಿಲ ಬಿಟ್ಟರೆ ಕೊರೊನಾ ಎಫೆಕ್ಟ್ ಜಾಸ್ತಿಯಾಗಬಹುದು ಎಂದರು. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, 11 ಗಂಟೆಯ ಬಳಿಯ ಯಾವುದೇ ಬಾರ್‌, ವೈನ್‌ಶಾಪ್‌, ಲಿಕ್ಕರ್‌ಶಾಪ್‌, ಪಬ್‌ ಮುಂತಾದವುಗಳು ನಡೆಯಬಾರದು ಎಂದು ಸೂಚನೆ ನೀಡಲಾಗಿದೆ ಎಂದರು.
ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿ ಅವುಗಳನ್ನು ತೆರೆದಿದ್ದೇ ಆದಲ್ಲಿ ನಿರ್ದಾಕ್ಷಿಣ್ಯವಾಗಿ ಪರವಾನಗಿ ರದ್ದುಪಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಸಚಿವ ಎಚ್‌. ನಾಗೇಶ್ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಈ ಸಂಬಂಧ ಇಮೇಲ್ ಮೂಲಕವೂ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ಧಾರೆ.
ಕೊರೊನಾ 2ನೇ ಅಲೆ ಬ್ರಿಟನ್‌ನಿಂದ ಬಂದಿರುವುದರಿಂದಾಗಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಮುಂದುವರಿಸಲಾಗುವುದು, ಇಲ್ಲವಾದಲ್ಲಿ ತೆಗೆದು ಹಾಕಲಾಗುವುದು ಎಂದು ನಾಗೇಶ್ ಮಾಹಿತಿ ನೀಡಿದರು. ಈ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದ ಅವರು, ಒಟ್ಟಾರೆ ಕರ್ಫ್ಯೂದಿಂದಾಗಿ ಕೊರೊನಾ ಬಗ್ಗೆ ಜನರಲ್ಲಿಯೂ ಹೆಚ್ಚಿನ ಜಾಗೃತಿ ಮೂಡಲು ಸಹಕಾರಿಯಾಗುವುದು ಎಂದು ತಿಳಿಸಿದರು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...