ರೈಲಿಗೆ ಸಿಲುಕುತ್ತಿದ್ದ ಬಾಲಕಿಯನ್ನು ತನ್ನ ಪ್ರಾಣ ಒತ್ತೆಯಾಗಿಟ್ಟು ಯೋಧರೊಬ್ಬರು ರಕ್ಷಿಸಿ ಸಾಹಸ ಮೆರೆದಿದ್ದಾರೆ.
ಈ ಘಟನೆ ನಡೆದಿರುವುದು ಮುಂಬೈನ ಮಹಾ ಲಕ್ಷ್ಮಿ ರೈಲ್ವೆ ನಿಲ್ದಾಣದಲ್ಲಿ .
ಮಹಾರಾಷ್ಟ್ರ ರಕ್ಷಣಾ ಪಡೆಯ ಸಚಿನ್ ಪೋಲ್ ಸಾಹಸ ಮೆರೆದ ಯೋಧ.
ಮಹಾಲಕ್ಷ್ಮಿ ರೈಲ್ವೆ ನಿಲ್ದಾದಿಂದ ರೈಲು ಹೊರಟಿತ್ತು. ಅದನ್ನು ಕಂಡು ತಾಯಿಯೊಬ್ಬರು ಬಾಲಕಿಯ ಕೈ ಹಿಡಿದು ಓಡಿ ಬಂದಿದ್ದಾರೆ…! ರೈಲಿನ ಬಾಗಿಲು ಬಳಿ ಬಂದಾಗ ಪೋಷಕರು ರೈಲು ಹತ್ತಿದ್ದಾರೆ. ರೈಲು ಹತ್ತಲು ಪ್ರಯತ್ನಿಸಿದ ಬಾಲಕಿ ಕಾಲು ಜಾರಿ ಬಿದ್ದಿದ್ದಾಳೆ..! ಇದನ್ನು ಕಂಡ ಅಲ್ಲೇ ಇದ್ದ ಯೋಧ ತನ್ನ ಪ್ರಾಣ ಲೆಕ್ಕಿಸದೆ ಬಾಲಕಿಯನ್ನು ಕಾಪಾಡಿದ್ದಾರೆ. ರೈಲಿಗೆ ಸಿಲುಕ ಬೇಕಿದ್ದ ಬಾಲಕಿಯನ್ನು ಎಳೆದುಕೊಂಡಿದ್ದಾರೆ.
ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.