ಆ ಅಜ್ಜಿ ತನ್ನ ಮನೆಗೆ ವಾಪಸ್ಸು ಹೋಗಿದ್ದು 20 ವರ್ಷದ ನಂತರ..! ಮನೆ ಮರೆತ ಅಜ್ಜಿಯನ್ನು ಮರಳಿ ಸೇರಿಸಿದ ವೈದ್ಯ..!

Date:

ಆ ಡಾಕ್ಟರ್ ಆಕೆಯ ಪಾಲಿಗೆ ವೈದ್ಯೋ ನಾರಾಯಾಣ ಹರಿ..! ಆಕೆಗೆ ಮರುಜನ್ಮ ಕೊಟ್ಟ ಬ್ರಹ್ಮ..! ಇಪ್ಪತ್ತು ವರ್ಷದ ನಂತರ ತಾನ್ಯಾರೆಂದು ಗೊತ್ತು ಮಾಡಿಕೊಂಡು ತನ್ನವರನ್ನು ಸೇರಿದಳು ಆಕೆ.!
ಆಕೆ ಯಾರು…ಆಕೆಗೆ ಪುನರ್ಜನ್ಮ ಕೊಟ್ಟ ಆ ಡಾಕ್ಟರ್ ಯಾರು..? ಇಲ್ಲಿದೆ ರಿಯಲ್ ಹಾರ್ಟ್ ಟಚಿಂಗ್  ಸ್ಟೋರಿ..!
ಅವರು ಕೋಲ್ಕತ್ತಾ ಮೂಲದ ಡಾಕ್ಟರ್ ಸುಚಂದ್ರ ಬ್ರಹ್ಮ..ಹೆಸರಿನಂತೆಯೇ ಸಾಕ್ಷಾತ್ ದೇವರಾಗಿ ವೃದ್ದೆಯೊಬ್ಬಳಿಗೆ ಮತ್ತೆ ತನ್ನವರನ್ನು ಸೇರುವಂತೆ ಮಾಡಿದ ಕರುಣಾ ಮಹಿ ಡಾಕ್ಟರ್..!
ಆಕೆ ಆಂಧ್ರದ ಗೋದಾವರಿ ಜಿಲ್ಲೆಯ ದ್ವಾರಪುಡಿ ಎಂಬ ಗ್ರಾಮದ ವೃದ್ದೆ.ಹೆಸರು, ಬಾದುಲ ಮಾಂಗ. ಇಪ್ಪತ್ತು ವರ್ಷದ ಹಿಂದೆ ವೈಜಾಗ್ ರೈಲ್ವೆ ನಿಲ್ದಣದಲ್ಲಿ ತನ್ನವರಿಂದ ತಪ್ಪಿ ಹೋಗ್ತಾರೆ…! ಕಾಣೆಯಾದ ಅವರ ಲೈಫು ಚಿಂದಿ ಚಿತ್ರಾನ್ನ ಆಗಿ ಬಿಟ್ಟಿರುತ್ತೆ..! ದಿಕ್ಕು ದೆಸೆ ಇಲ್ಲದೇ ಅಲೆದಾಡಿ ಅಲೆದಾಡಿ ಕೋಲ್ಕತ್ತಾಗೆ ಬರ್ತಾರೆ..! ಹೊಟ್ಟೆಗೆ ಅನ್ನವಿಲ್ಲ..ಉಳಿಯಲು ಜಾಗವಿಲ್ಲ, ಮಾತು ಬರಲ್ಲ…!ಕೊಳಕು ಬಟ್ಟೆ ಧರಿಸಿ ಅಲೆಯುತ್ತಾ ಅಲೆಯುತ್ತಾ ಮಾನಸಿಕ ಸ್ಮಿತತೆ ಕಳ್ಕೊಳ್ತಾರೆ..!
ಮಾನಸಿಕ ಅಸ್ವಸ್ಥತೆ ಹಾಗೂ ಅಪೌಷ್ಟಿಕತೆಯಿಂದ ಬಳಲಿ ಬೆಂಡಾಗಿದ್ದ ಅವರು ಕೋಲ್ಕತ್ತಾದ ಯುವಭಾರತಿ ಕ್ರೀಡಾಂಗಾಣದ ಹೊರಗೆ ಅನಾಥವಾಗಿ ಬಿದ್ದಿರುತ್ತಾರೆ..!ಅದನ್ನು ಕಂಡ ಪೊಲೀಸರು ಆಕೆಯನ್ನು ಹಾಸ್ಪೆಟಲ್ ಗೆ ಸೇರಿಸ್ತಾರೆ..! ಎರಡು ವರ್ಷ ಚಿಕಿತ್ಸೆ ನೀಡಿ ಆಕೆಯನ್ನು ಡಿಸ್ಚಾರ್ಜ್ ಮಾಡಲಾಗುತ್ತೆ..! ಆದರೆ, ಆಸ್ಪತ್ರೆಯಿಂದ ಹೊರ ಬಂದ ಅವರು ಎಲ್ಲಿಗೆ ಹೋಗ್ಬೇಕು..? ಮತ್ತೆರಡು ಬೀದಿ ವಾಸ..! ಫುಟ್ಬಾತ್ ಚಿಂದಿ ಲೈಫು.. ಆಗ ಆಕೆಯ ಪಾಲಿಗೆ ದೇವರಾಗಿರಬೇಕು ಬಂದವರೆ ಈ ಡಾಕ್ಟರ್ ಸುಚಂದ್ರ ಬ್ರಹ್ಮ..!
ಬೀದಿಯಲ್ಲಿ ಅನಾಥವಾಗಿದ್ದ ಬಾದುಲರನ್ನು ಅನಾಥಶಮಶ್ರಮಕ್ಕೆ ಸೇರಿಸಿದ್ರು..ಮಾನಸಿಕ ಕಾಯಿಲೆ, ಮರಗುಳಿ ಸಮಸ್ಯೆಗೆ ಟ್ರೀಟ್ಮೆಂಟ್ ಕೊಟ್ಟರು..! ಚಿಕಿತ್ಸೆ ನೋಡ್ತಾ ಬಂದ ಹಾಗೆ ಬಾದುಲಾ ಹಂತ ಹಂತವಾಗಿ ಚೇತರಿಸಿಕೊಂಡ್ರು..! ನೆನಪಿನ ಶಕ್ತಿ ಬಂತು.! ಅವರು ಸಂಪೂರ್ಣ ಚೇತರಿಸಿಕೊಂಡ ಬಳಿಕ ಅವರ ಸಹಾಯದಿಂದಲೇ ಅವರ ಕುಟುಂಬದವರನ್ನು ಸಂಪರ್ಕಿಸಿ ಕರೆದುಕೊಂಡು ಹೋಗುವಂತೆ ಬ್ರಹ್ಮ ಹೇಳಿದ್ರು..! ಆದರೆ, ಆ ವೃದ್ಧೆ ಕಳೆದು ಹೋದ ಆರಂಭದ ಎರಡು ವರ್ಷದಲ್ಲಿ ಹುಡುಕಿ ಹುಡುಕಿ ಸುಸ್ತಾಗಿ..ಇವರಿನ್ನು ಸಿಗಲ್ಲ ಎಂದು.ಡಿಸೈಡ್ ಮಾಡಿದ್ದ ಕುಟುಂಬ, ಇಪ್ಪತ್ತು ವರ್ಷದ ನಂತರ ಯಾರೋ ಕಾಲ್ ಮಾಡಿ ಕರೆದು ಕೊಂಡು ಹೋಗಲು ಹೇಳಿದ್ರೆ ನಂಬಲು ಸಾಧ್ಯವೇ..? ಬಾದುಲಾ ಕುಟುಂಬ ಕೂಡ ಅದನ್ನು.ನಂಬಲಿಲ್ಲ..! ಡಾಕ್ಟರ್ ಬ್ರಹ್ಮಾರ ಮಾತಿಗೆ ಬೆಲೆ ಕೊಡಲಿಲ್ಲ.!
ಕೊನೆಗೊಂದು ದಿನ ಬಾದುಲಾ ರೇ ಡಾಕ್ಟರ್ ಬ್ರಹ್ಮಾಗೆ ತಮ್ಮ ಮನೆ ದಾರಿ ತೋರಿಸ್ತಾ ಅವರನ್ನು ಕರ್ಕೊಂಡು ತನ್ನೂರಿಗೆ ಬಂದೇ ಬಿಟ್ಟರು..! ತನ್ನ ಮನೆಗೆ ಹೋಗಿ ತನ್ನವರು ಎದುರು ನಿಂತರು..! ಕುಟುಂಬಸ್ಥರಿಗೆಲ್ಲಾ ನಂಬಲು ಕಷ್ಟವಾಯ್ತು..ಆದ್ರೆ ತುಂಬಾ ಸಂತೋಷವಾಯ್ತು..! ಇಪ್ಪತ್ತು ವರ್ಷದ ನಂತರ ಬಾದುಲಾ ಮರಳಿ ಮನೆ ಸೇರಲು ಕಾರಣರಾದ ಡಾಕ್ಟರ್ ಬ್ರಹ್ಮಾಗೆ ಎಲ್ಲರೂ ಕೃತಜ್ಞತೆ ಸಲ್ಲಿಸಿದ್ರು..! ಡಾಕ್ಟರ್ ಬ್ರಹ್ಮ ರಿಯಲ್ ಹೀರೋ ಆದ್ರು..!
ತಾನು ಯಾರು, ತನ್ನವರ್ಯಾರು ಎಂದು ತಿಳಿಯದ , ಯಾವುದೂ ನೆನಪಿಲ್ಲದ, ಮಾತು ಬಾರದ ವೃದ್ಧರು ಆರೋಗ್ಯ ಸರಿಪಡಿಸಿ, ಅವರು ಕುಟುಂಬ ಸೇರುವಂತೆಯೂ ಮಾಡಿದ ಡಾಕ್ಟರ್ ಬ್ರಹ್ಮಾಗೆ ಸಲಾಂ..!

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಪ್ರತಿಯೊಬ್ಬರಿಗೂ ಈ ಅನುಭವ ಆಗಿರುತ್ತೆ..! ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..!

ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!

ಬಿಟ್ಟು ಹೋದ ಹುಡುಗಿಗೆ…!

ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!

ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!

Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!

ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!

 

Share post:

Subscribe

spot_imgspot_img

Popular

More like this
Related

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...