ಗರುಡ ಗಮನ ರಿಮೇಕ್ ಹಕ್ಕನ್ನು ಮುಗಿಬಿದ್ದು ಖರೀದಿಸಿದ ಖ್ಯಾತ ತಮಿಳು ನಿರ್ದೇಶಕ

1
45

ಗರುಡಗಮನ ವೃಷಭವಾಹನ.. ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಅತಿ ದೊಡ್ಡ ಮಟ್ಟದಲ್ಲಿ ಗೆದ್ದ ಕನ್ನಡದ ಚಿತ್ರ. ಚಿತ್ರದ ಟೈಟಲ್ ಅನಾವರಣವಾದಾಗಿನಿಂದಲೂ ಸಹ ವಿಭಿನ್ನ ರೀತಿಯ ಕುತೂಹಲವನ್ನು ಹುಟ್ಟುಹಾಕಿದ್ದ ಈ ಚಿತ್ರ ಬಿಡುಗಡೆಯಾದ ಮೇಲೆ ಆ ಕುತೂಹಲ ಮತ್ತು ನಿರೀಕ್ಷೆಯ ಮಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಕಾಂಬಿನೇಷನ್ ಚಿತ್ರದಲ್ಲಿ ಸಿಕ್ಕಾಪಟ್ಟೆ ಕ್ಲಿಕ್ ಆಗಿತ್ತು ಎಂದೇ ಹೇಳಬಹುದು. ಚಿತ್ರ ಚಿತ್ರಮಂದಿರಕ್ಕೆ ಕಾಲಿಟ್ಟ ನಂತರ ಬಾಲಿವುಡ್, ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ಚಿತ್ರರಂಗಗಳಿಂದಲೂ ಸಹ ಒಳ್ಳೆಯ ಟಾಕ್ ಪಡೆದುಕೊಳ್ಳಲು ಆರಂಭಿಸಿತು.

ಅನ್ಯ ಚಿತ್ರರಂಗಗಳ ಖ್ಯಾತ ನಿರ್ದೇಶಕರು ಗರುಡಗಮನ ವೃಷಭವಾಹನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಿದರು. ಹೀಗೆ ಇತರೆ ಚಿತ್ರರಂಗಗಳಿಗೆ ಚಿತ್ರಕ್ಕೆ ಉತ್ತಮ ವಿಮರ್ಶೆ ಬರಲಾರಂಭಿಸಿದ ನಂತರ ಈ ಚಿತ್ರ ಖಚಿತವಾಗಿಯೂ ಬೇರೆ ಭಾಷೆಗಳಿಗೆ ರಿಮೇಕ್ ಆಗಲಿದೆ ಎಂಬ ಸುದ್ದಿ ಕನ್ನಡ ಚಿತ್ರರಂಗದ ವಲಯದಲ್ಲಿ ಹರಿದಾಡಿತ್ತು. ಆ ಊಹೆ ನಿಜವಾಗಿದ್ದು ತಮಿಳಿನ ಖ್ಯಾತ ನಿರ್ದೇಶಕರಾದ ಗೌತಮ್ ವಾಸುದೇವ್ ಮೆನನ್ ಇದೀಗ ಗರುಡಗಮನ ವೃಷಭವಾಹನ ಚಿತ್ರದ ರಿಮೇಕ್ ಹಕ್ಕನ್ನು ಖರೀದಿಸಿದ್ದಾರೆ.

ತಮ್ಮದೇ ಆದ ವಿಭಿನ್ನ ಮೇಕಿಂಗ್ ಶೈಲಿಯಿಂದ ಹೆಸರು ಮಾಡಿರುವ ಗೌತಮ್ ವಾಸುದೇವ್ ಮೆನನ್ ಇದೀಗ ಗರುಡಗಮನ ವೃಷಭವಾಹನದಂತಹ ವಿಭಿನ್ನ ಕಥಾ ಹಂದರವಿರುವ ಚಿತ್ರವನ್ನು ತಮಿಳಿನ ನೇಟಿವಿಟಿಗೆ ತಕ್ಕಂತೆ ಯಾವ ರೀತಿ ತೆರೆಯ ಮೇಲೆ ತೆರಳಿದ್ದಾರೆ ಮತ್ತು ಯಾವ ನಟರುಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ.

1 COMMENT

LEAVE A REPLY

Please enter your comment!
Please enter your name here