ಪ್ರೀತಿ ಇದ್ರೆ ಅನುಮಾನ ಬೇಡ.. ಅನುಮಾನ ಇದ್ರೆ ಪ್ರೀತಿ ಬೇಡ್ವೇ ಬೇಡ..!

0
109

ಅವಳ ಅಪ್ಪನ ಆರೋಗ್ಯ ಹದಗೆಟ್ಟು ಆಸ್ಪತ್ರೆಯಲ್ಲಿ ನರಳ್ತಾ ಇದ್ರು. ಮಗಳಾದವಳು ಅಪ್ಪನನ್ನು ನೋಡಿಕೊಳ್ತಿದ್ಲು. ಅವಳ ಕಾಲೇಜು ಶುರುವಾಗಿ 2 ತಿಂಗಳು ಮುಗಿದ್ರೂ ಅವಳಿನ್ನೂ ಅಡ್ಮಿಶನ್ ಆಗಿರ್ಲಿಲ್ಲ..! ಅಪ್ಪ ಸರಿ ಹೋಗ್ಲಿ ಅಂತ ಅವಳು ಅಪ್ಪನ ಜೊತೆಗೇ ಇದ್ಲು. ಆದ್ರೆ ಆ ದೇವ್ರು ಅವಳಪ್ಪನನ್ನು ತನ್ನ ಬಳಿ ಕರ್ಕೊಂಡು ಬಿಟ್ಟ..! ಮುಂದೇನು ಅಂತ ಗೊತ್ತಾಗ್ಲಿಲ್ಲ.. ಗೊತ್ತಿದ್ದವರೊಬ್ಬರ ಬಳಿ ಹೋಗಿ ಕಾಲೇಜಿಗೆ ಸೇರೋ ಬಗ್ಗೆ ಮಾತಾಡಿದ್ಲು. ಈಗಾಗಲೇ ಎರಡು ತಿಂಗಳು ಕಳೆದಿದೆ, ಈಗ ಹೇಗೆ..? ಆದ್ರೂ ಪ್ರಯತ್ನ ಮಾಡಿದ್ರು. ಕೊನೆಗೆ ಧಾರವಾಡದಲ್ಲಿ ಗೊತ್ತಿದ್ದವರ ಬಳಿ ಹೋಗು ಕೂತು ಹುಡುಗಿಯ ವಿಷಯ ಹೇಳಿದ್ರು. ಅವರು ಮ್ಯಾನೇಜ್ ಮೆಂಟ್ ಜೊತೆ ಮಾತಾಡಿ, ಹಾಸ್ಟೆಲ್ ವ್ಯವಸ್ಥೆಯನ್ನೂ ಮಾಡಿಸಿ ಅವಳಿಗೆ ಸೀಟ್ ಕೊಡಿಸಿದ್ರು..! `ನೋಡಮ್ಮಾ, ಚೆನ್ನಾಗಿ ಓದಬೇಕು. ನಾವು ನಿನ್ನ ಬಗ್ಗೆ ತುಂಬ ಹೇಳಿದೀವಿ. ನಮ್ಮ ಮರ್ಯಾದೆ ಉಳಿಸು’ ಅಂತ ಬುದ್ದೀ ಹೇಳಿದ್ರು..! ಅವಳು ಆಯ್ತು ಅನ್ನೋ ಹಾಗೆ ತಲೆಯಾಡಿಸಿದ್ಲು.
ಆರಂಭದಲ್ಲಿ ಕಾಲೇಜಿಗೆ ಅವಳು ಹೋಗ್ತಾ ಇದ್ರೆ ಮಹಾಲಕ್ಷ್ಮಿ ತರ ಕಾಣ್ತಿದ್ಲು. ಚೂಡಿದಾರ್ ಹಾಕ್ಕೊಂಡು, ಲಂಗ ದಾವಣಿ ಹಾಕ್ಕೊಂಡು ಮುದ್ದುಮುದ್ದಾಗಿ ಕಾಲೇಜಿಗೆ ಹೋಗ್ತಿದ್ರೆ, ಎಷ್ಟು ಒಳ್ಳೇ ಹುಡುಗಿ ಅಂತ ಖಂಡಿತ ಅನ್ನಿಸ್ತಿತ್ತು..! ಹೀಗೇ 5-6 ತಿಂಗಳು ಕಳೀತು, ಅವಳಲ್ಲಿ ಬದಲಾವಣೆಗಳಾಯ್ತು. ಲಂಗ ದಾವಣಿ, ಚೂಡಿದಾರ್ ಹೋಗಿ ಜೀನ್ಸ್-ಟೀ ಶರ್ಟ್ ಮೈ ಏರಿತ್ತು..! ಇದ್ಯಾಕೋ ಮಿಸ್ ಹೊಡೀತಿದೆ ಅಂತ ನೋಡಿದವ್ರಿಗೆ ಅನ್ನಿಸ್ತಿತ್ತು..! ಯೆಸ್ ಅವಳು ಚೇಂಜ್ ಆಗಿದ್ಲು, ಅವಳು ಲವ್ ಗುಂಗಲ್ಲಿ ಬಿದ್ದಿದ್ಲು..! ಹುಡುಗ ಒಳ್ಳೆಯವನಾಗಿದ್ರೆ ಅದನ್ನು ಪ್ರಶ್ನೆ ಮಾಡೋ ಅಧಿಕಾರ ಯಾರಿಗಿದೆ..? ಸೋ ಸೀಟು ಕೊಡಿಸಿದವರೂ ಏನೂ ಮಾತಾಡಲಿಲ್ಲ..! ಅವಳು ಸ್ಟೇಟ್ ಲೆವೆಲ್ ಸ್ವಿಮ್ಮರ್ ಒಬ್ಬನನ್ನು ಪ್ರೀತಿಸ್ತಾ ಇದ್ಲು. ಇವಳ ಜೀವನದ ಸ್ಟೋರಿ ಗೊತ್ತಿದ್ದ ಆ ಹುಡುಗನೂ ಅವಳನ್ನು ಇಷ್ಟಪಟ್ಟ..! ಇಬ್ಬರ ಲವ್ ಜೋರಾಗೇ ನಡೀತಾ ಇತ್ತು. ಇದೆಲ್ಲಾ ಗೊತ್ತಿದ್ರೂ ಸೀಟು ಕೊಡಿಸಿದವರು ಸುಮ್ಮನೆ ಇದ್ರು..! ಒಂದು ದಿನ ಅವಳ ಲವರ್ ಸ್ವಿಮ್ಮಿಂಗ್ ಕಾಂಪಿಟೇಶನ್ನಲ್ಲಿ ಗೆದ್ದಾಗ ಅವನ ಜೊತೆಗೆ ಗೆದ್ದಿದ್ದ ಮತ್ತೊಬ್ಬಳು ಹುಡುಗಿಯ ಜೊತೆ ಸ್ವಿಮ್ಮಿಂಗ್ ಪೂಲಲ್ಲಿದ್ದ ಫೋಟೋ ಫೇಸ್ ಬುಕ್ಕಲ್ಲಿ ಹಾಕಿದ್ದ..! ಇಬ್ಬರೂ ಒಂದೇ ಬ್ಯಾಚಿನವರು ಬೇರೆ ಬೇರೆ ವಿಭಾಗದಲ್ಲಿ ಗೆದ್ದ ಕಾರಣಕ್ಕೆ ಅವನು ಸಹಜವಾಗಿ ಫೋಟೋ ಹಾಕಿದ್ದ ಅಷ್ಟೆ..! ಈ ಫೋಟೋ ನೋಡಿದ ಅವನ ಹುಡುಗಿಗೆ ಕೋಪ ನೆತ್ತಿಗೇರಿತ್ತು..! ಫೋನ್ ಮಾಡಿ ` ಅವಳ ಜೊತೇಲೇ ಇರು, ಅವಳನ್ನೇ ಲವ್ ಮಾಡು’ ಅಂತ ಹೇಳಿ ಫೋನ್ ಕಟ್ ಮಾಡಿಬಿಟ್ಲು.. ಅವನಿಗೆ ಅರ್ಥವೇ ಆಗಲಿಲ್ಲ. ಅವಳನ್ನು ಕನ್ವಿನ್ಸ್ ಮಾಡೋಕೆ ಎಷ್ಟೇ ಪ್ರಯತ್ನ ಪಟ್ಟರೂ ಅವಳು ಒಪ್ಪಲೇ ಇಲ್ಲ..! ಕೊನೆಗೆ ಆ ಹುಡುಗ, ಅವಳಿಗೆ ಸೀಟ್ ಕೊಡಿಸಿದ್ದವರಿಗೆ ಫೋನ್ ಮಾಡಿ ವಿಷಯ ಹೇಳ್ದ..! ಸಾರ್ ನಾನು ಅವಳನ್ನು ತುಂಬಾ ಇಷ್ಟ ಪಡ್ತೀನಿ, ಪ್ಲೀಸ್ ಹೆಲ್ಪ್ ಮಾಡಿ ಅಂತ..! ಇದು ನಿಮ್ಮ ವಿಷಯ ನೀವೇ ಬಗೆಹರಿಸಿಕೊಳ್ಳಿ ಅಂತ ಅವರು ಸುಮ್ಮನಾದ್ರು..! ಮತ್ತೆ ಎಷ್ಟೇ ಪ್ರಯತ್ನ ಪಟ್ಟರೂ ಅವಳು ಅವನ ಕೈಗೆ ಸಿಗಲೇ ಇಲ್ಲ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಅವನು ಅವಳ ಫ್ರೆಂಡ್ಸ್ ಗೆ ಹೇಳಿ ಕಳಿಸೋಕೆ ಶುರು ಮಾಡ್ದ. ಆಗ ಆ ಹುಡುಗಿ ಬಂದು ಸೀಟು ಕೊಡಿಸಿದವರ ಬಳಿ ಕಂಪ್ಲೇಂಟ್ ಮಾಡಿದ್ಲು..! `ಅವನು ನಂಗೆ ತುಂಬಾ ತೊಂದರೆ ಕೊಡ್ತಿದ್ದಾನೆ’ ಅಂತ..! ಅವರಿಗೆ ಎಲ್ಲಾ ವಿಷಯ ಗೊತ್ತಿದ್ರಿಂದ ಅವಳಿಗೇ ಬೈದು ಕಳಿಸಿದ್ರು. ನೀನು ಅವನ ಹಿಂದೆ ಸುತ್ತೋ ತನಕ ಸುತ್ತಿ ಇವತ್ತು ಅವನ ಮೇಲೆ ಕಂಪ್ಲೆಟ್ ಹೇಳ್ಬೆಡ, ನಂಗೆಲ್ಲಾ ಗೊತ್ತು ಅಂತ ಅಂದ್ರು..! ಅವಳು ತಲೆತಗ್ಗಿಸಿ ಸುಮ್ಮನೆ ಹೋಗಿಬಿಟ್ಲು..!
ಹೀಗೇ ಕೆಲವು ತಿಂಗಳು ಕಳೀತು. ಒಂದು ದಿನ ಅವಳಿಗೆ ತಪ್ಪು ಮಾಡಿದೆ ಅನ್ನಿಸಿ ಅವನ ಬಳಿ ವಾಪಸ್ ಹೋಗ್ತಾಳೆ. ಆದ್ರೆ ಅವನು ಅಷ್ಟರಲ್ಲಿ ನಿರ್ಧಾರ ಮಾಡಿರ್ತಾನೆ.. ಕೂರಿಸ್ಕೊಂಡು ಹೇಳ್ತಾನೆ. `ನೋಡು, ನಾನು ನಿನ್ನ ಕನ್ವಿನ್ಸ್ ಮಾಡೋಕೆ ತುಂಬಾ ಪ್ರಯತ್ನ ಪಟ್ಟೆ. ನೀನು ಕಷ್ಟದಿಂದ ಬಂದವಳು ಅನ್ನೋ ಕಾರಣಕ್ಕೆ ನಿನಗೂ ಒಳ್ಳೇ ಲೈಫ್ ಸಿಗಲಿ ಅಂತ ನಿನ್ನನ್ನು ಪ್ರೀತಿಸ್ದೆ. ತುಂಬ ಇಷ್ಟಪಟ್ಟೆ. ನನ್ನ ಬ್ಯಾಚ್ ಮೇಟ್ ಜೊತೆ ಫೋಟೋ ಹಾಕಿದ ಒಂದೇ ಕಾರಣಕ್ಕೆ ನೀನು ಇಷ್ಟು ದಿನ ನನ್ನಿಂದ ದೂರ ಇದ್ದೆ. ಅಂದ್ರೆ ಆ ಪೊಸೆಸಿವ್ ನೆಸ್ ನಮ್ಮಿಬ್ಬರನ್ನು ದೂರ ಮಾಡಿಬಿಡ್ತು..! ನಿನ್ನ ಅನುಮಾನ ನಮ್ಮ ಪ್ರೀತಿಯನ್ನು ಸಾಯಿಸಿಬಿಡ್ತು..! ಇದೇ ಅನುಮಾನ ನಾಳೆ ಮದುವೆಯಾದ ಮೇಲೂ ಇದ್ರೆ ನಮ್ಮ ಸಂಸಾರ ಹೇಗೆ ನಡೆಯುತ್ತೆ..? ಇಬ್ಬರ ಲೈಫೂ ಹಾಳಾಗುತ್ತೆ. ಇಷ್ಟು ದಿನ ದೂರ ಇದ್ದು ನನಗೂ ಅಭ್ಯಾಸ ಆಗಿದೆ. ನೀನೂ ಖುಷಿಯಾಗಿರು. ನಂಗೆ ನಿನ್ನ ಬಗ್ಗೆ ಪ್ರೀತಿ ಇದೆ. ಆದ್ರೆ ಅದು ಕೇವಲ ಫ್ರೆಂಡ್ ಆಗಿ ಅಷ್ಟೆ. ಬೇಡ ಅಂದಾಗ ಬಿಟ್ಟು ಹೋಗೋಕೆ, ಬೇಕು ಅಂದಾಗ ವಾಪಸ್ ಬರೋಕೆ ಲವ್ ಈಸ್ ನಾಟ್ ಗೇಮ್’ ಅಂತ ಹೇಳಿ ಅವಳನ್ನು ಕಳಿಸಿಬಿಡ್ತಾನೆ.. ಅವಳಿಗೆ ಈಗ ಉಳಿದಿರೋದು ಕಣ್ಣೀರಷ್ಟೆ..!
ಅನುಮಾನ ಪಡಬೇಡಿ, ಅದೂ ಏನೂ ಗೊತ್ತಿಲ್ಲದೇ…! ಅನುಮಾನ ಇವರ ಜೀವನದಲ್ಲಿ ಪ್ರೀತಿಯನ್ನು ಸಾಯಿಸ್ತು.. ಆದ್ರೆ ಎಷ್ಟೋ ಜನರ ಜೀವನದಲ್ಲಿ ಜೀವನವನ್ನೇ ಸಾಯಿಸಿಬಿಡುತ್ತೆ..! ಪ್ರೀತಿಯಲ್ಲಿ ಅನುಮಾನ ಬೇಡ, ಅನುಮಾನವಿದ್ದ ಕಡೆ ಪ್ರೀತಿ ಬೇಡವೇ ಬೇಡ.

POPULAR  STORIES :

ನೂರು ವರ್ಷದಲ್ಲಿ ಭಾರತೀಯ ಮಹಿಳೆ ಹೇಗೆಲ್ಲಾ ಬದಲಾದಳು ಗೊತ್ತಾ..?

ಜೀತದಾಳಾಗಿದ್ದವ ಇವತ್ತು ಡಾಕ್ಟರ್..!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here