No menu items!
17.7 C
Munich
Friday, May 1, 2026

ಪ್ರಧಾನಿ ವಿರುದ್ಧ ಗರಂ ಆದ ಮಾಜಿ ಪ್ರಧಾನಿ

Must read

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗರಂ ಆಗಿದ್ದಾರೆ.
ವಿದೇಶದಿಂದ ಕಪ್ಪು ಹಣ ತರುವುದು ಮತ್ತು ಉದ್ಯೋಗ ನೀಡುವುದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಜಿಎಸ್ ಟಿ ಕೆಟ್ಟ ನಿರ್ಧಾರ.

ನೋಟ್ ಬ್ಯಾನ್ ನಿಂದ ಉತ್ಪಾದನಾ ಕ್ಷೇತ್ರಕ್ಕೆ ಪೆಟ್ಟು ಬಿದ್ದಿದೆ. ವಿಜ್ಞಾನ‌ ಮತ್ತು ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿಯೂ ಸರ್ಕಾರ ವಿಫಲವಾಗಿದೆ. ಶೈಕ್ಷಣಿಕ‌ ಪರಿಸರ ಸಹ ಅಧೋಗತಿಗೆ ತಲುಪಿದೆ ಎಂದು ಮನಮೋಹನ್ ಸಿಂಗ್ ಟೀಕಿಸಿದ್ದಾರೆ.

ಮೇಕ್ ಇನ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ ಯೋಜನೆಗಳ ಜಾರಿಯೂ ಯಾವುದೇ ರೀತಿಯ‌ ಉಪಯೋಗಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article